ನ್ಯೂಸ್ ನಾಟೌಟ್: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಫುಲ್ ಅಲರ್ಟ್ ಆಗಿವೆ. ಯಾರನ್ನು ಕಣಕ್ಕಿಳಿಸುವುದು ಅನ್ನುವ ದೀರ್ಫಾಲೋಚನೆಯಲ್ಲಿ ತೊಡಗಿಕೊಂಡಿವೆ. ಹೈಕಮಾಂಡ್ ಆದೇಶ, ಜಾತಿ ರಾಜಕೀಯ, ಹಣ ಬಲ ಎಲ್ಲವನ್ನುನೋಡಿಕೊಂಡು ಟಿಕೆಟ್ ಸಿಗುವ ನಿರೀಕ್ಷೆ ಇದ್ದು ಸುಳ್ಯ ಹಾಗೂ ಕೊಡಗು ಜಿಲ್ಲೆಯಲ್ಲೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಸೋಲಿಲ್ಲದ ಸರದಾರ ಎಸ್ ಅಂಗಾರ ಏಳನೇ ಬಾರಿಗೆ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಮತ್ತೊಂದು ಕಡೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಸಂಯೋಜಕ ನಂದ ಕುಮಾರ್ ಹೆಸರು ಕೂಡ ಕೇಳಿ ಬರುತ್ತಿದೆ.
ಸುಳ್ಯದ ಬಂಗಾರ ಖ್ಯಾತಿಯ ಸಚಿವ ಎಸ್.ಅಂಗಾರ ಸ್ಪರ್ಧಿಸುವುದಿಲ್ಲ ಎನ್ನುವ ಗಾಳಿ ಸುದ್ದಿಗಳು ಹರಿದಾದಿಡ್ಡವು.ಈ ವಿಚಾರ ಚರ್ಚೆಯಲ್ಲಿರುವಾಗಲೇ ಅಂಗಾರ ಬದಲಿಗೆ ಬಿಜೆಪಿಯಿಂದ ಸುಳ್ಯದ ಐವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ ಅನ್ನುವ ವಿಚಾರವೂ ಹೊರಬಿದ್ದಿತ್ತು. ಸದ್ಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ, ಆಪ್ ಅಭ್ಯರ್ಥಿಗಳು ಯಾರು ಎಂಬ ಬಗೆಗಿನ ಚರ್ಚೆಗಳು ಕೂಡ ನಡೆಯುತ್ತಿದೆ.










